Tuesday, May 23, 2017

ಪ್ರಚಲಿತ ವಿದ್ಯಮಾನ : 23 ಮೇ 2017 : ವಿಶ್ವಕಪ್​ನಲ್ಲಿ ಭಾರತಕ್ಕೆ ಸ್ವರ್ಣ

ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಮೊದಲ ಚಿನ್ನ

ಶಾಂಘೈ: ಆರ್ಚರಿ ವಿಶ್ವಕಪ್ ಚರಣವನ್ನು ಭಾರತ ತಂಡ ಸ್ವರ್ಣ ಪದಕ ಗೆಲ್ಲುವ ಮೂಲಕ ಆರಂಭಿಸಿದೆ. ಪುರುಷರ ಕಾಂಪೌಂಡ್ ಆರ್ಚರಿ ತಂಡ ಶನಿವಾರ ನಡೆದ ವಿಶ್ವಕಪ್ ಮೊದಲ ಚರಣದ ಫೈನಲ್​ನಲ್ಲಿ ಕೊಲಂಬಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಜಯಿಸಿತು.

ಇದು ವಿಶ್ವಕಪ್​ನ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ. ವಿಜೇತ ತಂಡದ ಅಭಿಷೇಕ್ ವರ್ಮ, ಚಿನ್ನ ರಾಜು ಶ್ರೀಧರ್ ಹಾಗೂ ಅಮನ್​ಜೀತ್ ಸಿಂಗ್ 226-221ರಿಂದ ಕೊಲಂಬಿಯಾದ ಕ್ಯಾಮಿಲೊ ಆಂಡ್ರೆಸ್ ಕಾರ್ಡೆನಾ, ಜೋಸ್ ಕಾಲೋಸ್ ಒಸ್ಪಿನಾ ಹಾಗೂ ಡೇನಿಯಲ್ ಮುನೊಜ್​ರನ್ನು ಸೋಲಿಸಿದರು. ಭಾರತೀಯರು ಮೊದಲ ಸೆಟ್​ನಲ್ಲಿ 58-57ರ ಭರ್ಜರಿ ಮುನ್ನಡೆಯೊಂದಿಗೆ ಮೇಲುಗೈ ಕಂಡರು. ವರ್ಮ ಎರಡು ಬಾರಿ ಪೂರ್ಣ 10 ಅಂಕ ಸಂಪಾದಿಸುವ ಮೂಲಕ ಭಾರತಕ್ಕೆ 116-113ರ ಮುನ್ನಡೆ ಒದಗಿಸಿದರು. 3ನೇ ಸೆಟ್​ನಲ್ಲಿ ಕೊಲಂಬಿಯಾ 52-52ರ ಸಮಬಲದ ಹೋರಾಟದೊಂದಿಗೆ ಪ್ರತಿರೋಧ ನೀಡಿದರೂ 4 ಹಾಗೂ ನಿರ್ಣಾಯಕ ಸೆಟ್​ನಲ್ಲಿ ಭಾರತ 58-56 ಮುನ್ನಡೆಯೊಂದಿಗೆ ಗೆಲುವಿನ ಸಂಭ್ರಮಾಚರಿಸಿತು. ಅಭಿಷೇಕ್ ವರ್ಮ 2015ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್​ನ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಪೋಲೆಂಡ್​ನಲ್ಲಿ ನಡೆದ ವಿಶ್ವಕಪ್​ನ ಅದೇ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ವರ್ಮ ಕಂಚು ಪದಕ ಗೆಲ್ಲುವಲ್ಲಿ ವಿಫಲಗೊಂಡರು. ಪ್ಲೇ ಆಫ್ ಪಂದ್ಯದಲ್ಲಿ ವರ್ಮ ಮತ್ತು ಜ್ಯೋತಿ ಸುರೇಖಾ ಜೋಡಿ 151-153ರಿಂದ ಅಮೆರಿಕದ ಜೋಡಿಗೆ ಶರಣಾಯಿತು.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...