ಹೇಗ್: ಭಾರತೀಯ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿದ್ದು, ಆರಂಭದಲ್ಲೇ ಪಾಕ್ ಗೆ ಹಿನ್ನಡೆಯಾಗಿದೆ.
18 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ್ದವು. ಈ ವೇಳೆ ಪಾಕಿಸ್ತಾನದ ನಿಜ ಬಣ್ಣವನ್ನು ಭಾರತ ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಪರ ವಕೀಲರು 90 ನಿಮಿಷಗಳ ಕಾಲ ವಾದ ಮಂಡಿಸಿದರು.
ಭಾರತ ಪರ ವಕೀಲ ಹರೀಶ್ ಸಾಳ್ವೆ, ನ್ಯಾಯಾಧೀಶ ಜಸ್ಟಿನ್ ರೋನಿ ಅಬ್ರಾಹಾಂ ಎದುರು ಹಲವು ಸಾಕ್ಷ್ಯಗಳನ್ನ ಸಲ್ಲಿಸಿದರು. 2016ರ ಮಾರ್ಚ್ನಲ್ಲಿ ಇರಾನ್ನಿಂದ ಕುಲಭೂಷಣ್ರನ್ನ ಅಪಹರಿಸಿದ್ದ ಪಾಕಿಸ್ತಾನ, ಅವರನ್ನು ಗುಪ್ತಚರ ಇಲಾಖೆ ಅಧಿಕಾರಿ ಎಂದು ಬಿಂಬಿಸಿತ್ತು. ಈ ಕುರಿತು ಸಾಕ್ಷ್ಯ ನೀಡಲು ಮನವಿ ಮಾಡಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಭಾರತದ ವಾದ ಮುಗಿಯುತ್ತಿದ್ದಂತೆ ಪಾಕಿಸ್ತಾನ ತನ್ನ ಪ್ರತಿವಾದ ಮಂಡಿಸಿತು. ಕೇವಲ ಕುಲಭೂಷಣ್ ತಪ್ಪೊಪ್ಪಿಕೊಂಡಿದ್ದ ವಿಡಿಯೋವನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪಾಕ್ ಸಲ್ಲಿಸಿದೆ. ಆದರೆ ಈ ವಿಡಿಯೋ ಪ್ರಸಾರ ಮಾಡೋಕೆ ನ್ಯಾಯಾಧೀಶರು ಅವಕಾಶ ನೀಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಅಲ್ಲದೇ ತನ್ನ ವಾದದಲ್ಲಿ ಬರಿ ಸುಳ್ಳು, ಕಪೋಲಕಲ್ಪಿತ ವಿಚಾರಗಳು, ಸಾಕ್ಷ್ಯಗಳನ್ನ ತಿರುಚಿ, ಅದನ್ನೇ ಸತ್ಯ ಎಂದು ಬಿಂಬಿಸಲು ಪಾಕಿಸ್ತಾನ ಪರ ವಕೀಲರು ನಡೆಸಿದ ಕಸರತ್ತು ವಿಫಲಗೊಂಡಿದೆ.
ಇದರಿಂದ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನ ದಿಕ್ಕು ತಪ್ಪಿಸೋ ಕೆಲಸವನ್ನಾಗಿ ಭಾರತ ಮಾಡುತ್ತಿದೆ ಅಂತಾ ಇಲ್ಲ ಸಲ್ಲದ ಆರೋಪಿಸಿದೆ.
ಪಾಕಿಸ್ತಾನದ ಸುಳ್ಳು ವಾದ..!
ಶಾಂತಿಯುತವಾಗಿ ಪರಸ್ಪರ ಸಮಸ್ಯೆಗೆ ಪರಿಹಾರ
ನೆರೆ ರಾಷ್ಟ್ರಗಳ ಜೊತೆಗೆ ಶಾಂತಿ ಬಯಸುವ ಪಾಕಿಸ್ತಾನ
ಕುಲಭೂಷಣ್ ಜಾಧವ್ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ
ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆ
ಜಾಧವ್ ಬಳಿ ಮುಸ್ಲಿಂ ಹೆಸರಿನ ಭಾರತದ ಪಾಸ್ಪೋರ್ಟ್ ಲಭ್ಯ
ತಾನು ಗುಪ್ತಚರ ಇಲಾಖೆ ಅಧಿಕಾರಿ ಅಂತ ತಪ್ಪೊಪ್ಪಿಗೆ ಹೇಳಿಕೆ
ಜಾಧವ್ ತಪ್ಪೊಪ್ಪಿಕೊಂಡಿರೋ ವಿಡಿಯೋ ಹಸ್ತಾಂತರಿಸಿದ ಪಾಕ್
ಬಲೂಚಿಸ್ತಾನದಲ್ಲಿ ಇರಾನ್ನಿಂದ ಬಂದಿದ್ದ ಜಾಧವ್ ಬಂಧನ
ಗುಪ್ತಚರ ಅಧಿಕಾರಿಗಳಿಗೆ ಶಿಕ್ಷೆ ನೀಡಿದರೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಲ್ಲ
–ಏಜೆನ್ಸೀಸ್
18 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ್ದವು. ಈ ವೇಳೆ ಪಾಕಿಸ್ತಾನದ ನಿಜ ಬಣ್ಣವನ್ನು ಭಾರತ ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಪರ ವಕೀಲರು 90 ನಿಮಿಷಗಳ ಕಾಲ ವಾದ ಮಂಡಿಸಿದರು.
ಭಾರತ ಪರ ವಕೀಲ ಹರೀಶ್ ಸಾಳ್ವೆ, ನ್ಯಾಯಾಧೀಶ ಜಸ್ಟಿನ್ ರೋನಿ ಅಬ್ರಾಹಾಂ ಎದುರು ಹಲವು ಸಾಕ್ಷ್ಯಗಳನ್ನ ಸಲ್ಲಿಸಿದರು. 2016ರ ಮಾರ್ಚ್ನಲ್ಲಿ ಇರಾನ್ನಿಂದ ಕುಲಭೂಷಣ್ರನ್ನ ಅಪಹರಿಸಿದ್ದ ಪಾಕಿಸ್ತಾನ, ಅವರನ್ನು ಗುಪ್ತಚರ ಇಲಾಖೆ ಅಧಿಕಾರಿ ಎಂದು ಬಿಂಬಿಸಿತ್ತು. ಈ ಕುರಿತು ಸಾಕ್ಷ್ಯ ನೀಡಲು ಮನವಿ ಮಾಡಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಭಾರತದ ವಾದ ಮುಗಿಯುತ್ತಿದ್ದಂತೆ ಪಾಕಿಸ್ತಾನ ತನ್ನ ಪ್ರತಿವಾದ ಮಂಡಿಸಿತು. ಕೇವಲ ಕುಲಭೂಷಣ್ ತಪ್ಪೊಪ್ಪಿಕೊಂಡಿದ್ದ ವಿಡಿಯೋವನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪಾಕ್ ಸಲ್ಲಿಸಿದೆ. ಆದರೆ ಈ ವಿಡಿಯೋ ಪ್ರಸಾರ ಮಾಡೋಕೆ ನ್ಯಾಯಾಧೀಶರು ಅವಕಾಶ ನೀಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಅಲ್ಲದೇ ತನ್ನ ವಾದದಲ್ಲಿ ಬರಿ ಸುಳ್ಳು, ಕಪೋಲಕಲ್ಪಿತ ವಿಚಾರಗಳು, ಸಾಕ್ಷ್ಯಗಳನ್ನ ತಿರುಚಿ, ಅದನ್ನೇ ಸತ್ಯ ಎಂದು ಬಿಂಬಿಸಲು ಪಾಕಿಸ್ತಾನ ಪರ ವಕೀಲರು ನಡೆಸಿದ ಕಸರತ್ತು ವಿಫಲಗೊಂಡಿದೆ.
ಇದರಿಂದ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನ ದಿಕ್ಕು ತಪ್ಪಿಸೋ ಕೆಲಸವನ್ನಾಗಿ ಭಾರತ ಮಾಡುತ್ತಿದೆ ಅಂತಾ ಇಲ್ಲ ಸಲ್ಲದ ಆರೋಪಿಸಿದೆ.
ಪಾಕಿಸ್ತಾನದ ಸುಳ್ಳು ವಾದ..!
ಶಾಂತಿಯುತವಾಗಿ ಪರಸ್ಪರ ಸಮಸ್ಯೆಗೆ ಪರಿಹಾರ
ನೆರೆ ರಾಷ್ಟ್ರಗಳ ಜೊತೆಗೆ ಶಾಂತಿ ಬಯಸುವ ಪಾಕಿಸ್ತಾನ
ಕುಲಭೂಷಣ್ ಜಾಧವ್ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ
ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆ
ಜಾಧವ್ ಬಳಿ ಮುಸ್ಲಿಂ ಹೆಸರಿನ ಭಾರತದ ಪಾಸ್ಪೋರ್ಟ್ ಲಭ್ಯ
ತಾನು ಗುಪ್ತಚರ ಇಲಾಖೆ ಅಧಿಕಾರಿ ಅಂತ ತಪ್ಪೊಪ್ಪಿಗೆ ಹೇಳಿಕೆ
ಜಾಧವ್ ತಪ್ಪೊಪ್ಪಿಕೊಂಡಿರೋ ವಿಡಿಯೋ ಹಸ್ತಾಂತರಿಸಿದ ಪಾಕ್
ಬಲೂಚಿಸ್ತಾನದಲ್ಲಿ ಇರಾನ್ನಿಂದ ಬಂದಿದ್ದ ಜಾಧವ್ ಬಂಧನ
ಗುಪ್ತಚರ ಅಧಿಕಾರಿಗಳಿಗೆ ಶಿಕ್ಷೆ ನೀಡಿದರೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಲ್ಲ
–ಏಜೆನ್ಸೀಸ್
No comments:
Post a Comment