Monday, May 29, 2017

ಪ್ರಚಲಿತ ವಿದ್ಯಮಾನ : ಮೇ 2017 : ಸೇನಾ ಮುಖ್ಯಸ್ಥರ ಮಾನವ ಗುರಾಣಿ ಹೇಳಿಕೆಗೆ ಕೇಂದ್ರ ಸಚಿವ ನಾಯ್ಡು ಬೆಂಬಲ

ನವದೆಹಲಿ: ಕಲ್ಲು ತೂರಾಟಗಾರರಿಂದ ತಪ್ಪಿಸಿಕೊಳ್ಳಲು ಸೇನಾ ಅಧಿಕಾರಿಯೊಬ್ಬರು ಮಾನವ ಗುರಾಣಿ ಬಳಸಿದ್ದರ ಕುರಿತಾದ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅನುಮೋದಿಸಿದ್ದಾರೆ.

ಕಾಶ್ಮೀರದಲ್ಲಿ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಸೇನಾ ಮುಖ್ಯಸ್ಥ ಬಿಪಿನ್​​ ರಾವತ್​ ಹೇಳಿಕೆಗೆ ಸಂಪೂರ್ಣ ಬೆಂಬಲವಿದೆ ಎಂದು ವೆಂಕಯ್ಯನಾಯ್ಡು ಟ್ವೀಟ್​​ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಚಾಸಾರ ನಿಯಂತ್ರಣಕ್ಕೆ ಸೇನೆ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಈ ಮಧ್ಯೆ ಕಲ್ಲು ತೂರಾಟಗಾರರನ್ನು ಹಿಮ್ಮೆಟ್ಟಿಸಲು ಸೇನಾ ಮೇಜರ್​ ಲೀತುಲ್​ ಗೊಗೊಯಿ ತಮ್ಮ ವಾಹನಕ್ಕೆ ಕಲ್ಲು ತೂರಾಟಗಾರನೊಬ್ಬನನ್ನು ಮಾನವ ಗುರಾಣಿಯನ್ನಾಗಿಸಿ, ಸಿಕ್ಕಿಸಿ, ರೌಂಡ್ಸ್ ಹೊಡೆಸಿದ್ದರು. ಅವರ ಈ ಮೇಜರ್ ಕಾರ್ಯಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತಾದರೂ, ಕೆಲವರು ವಿರೋಧಿಸಿದ್ದರು.

ಈ ಸಂಬಂಧ ಭೂಸೇನಾ ಮುಖ್ಯಸ್ಥ ಜ. ಬಿಪಿನ್​ ರಾವತ್​​ ಅವರು ತಮ್ಮ ಯೋಧರ ಮೇಲೆ ದಾಳಿ ನಡೆಯುವಾಗ ”ನೀವು ಕೈಕಟ್ಟಿಕೊಂಡು ಸುಮ್ಮನಿರಿ. ಮುಂದೆ ಅನಾಹುತ ನಡೆದು, ನಿಮ್ಮ ಮೃತದೇಹವನ್ನು ಸಕಲ ಗೌರವಗಳೊಂದಿಗೆ ನಿಮ್ಮ ಮನೆಗೆ ಕಳುಹಿಸಿಕೊಡುತ್ತೇನೆ” ಎಂದು ಹೇಳಲು ಸಾಧ್ಯವೇ? ಅವರ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಖಡಕ್​ ಪ್ರತಿಕ್ರಿಯೆ ನೀಡಿದ್ದರು.

-ಏಜೆನ್ಸೀಸ್​​

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...