ಬರ್ಲಿನ್: ವ್ಯಾಪಾರ ಒಪ್ಪಂದ, ರೈಲ್ವೇ ಆಧುನೀಕರಣ ಸೇರಿದಂತೆ 8 ಮಹತ್ವದ ಒಪ್ಪಂದಗಳಿಗೆ ಭಾರತ-ಜರ್ಮನಿ ಪರಸ್ಪರ ಸಹಿ ಹಾಕಿದೆ.ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಜೊತೆ ಎಂಟು ಒಪ್ಪಂದಗಳಿಗೆ ಸಹಿ ಹಾಕಿದರು.
ವ್ಯಾಪಾರ ಒಪ್ಪಂದ, ರೈಲ್ವೇ ಆಧುನೀಕರಣಕ್ಕೆ ಸಹಯೋಗ, ಸ್ಟಾರ್ಟ್ ಅಪ್ ಯೋಜನೆಗೆ ಜರ್ಮನಿ ಕಂಪನಿಗಳ ಸಹಕಾರ, ಗಂಗಾ ಸ್ವಚ್ಛತೆಗೆ ಜರ್ಮನ್ ಕಂಪನಿಗಳ ಭಾಗಿ, ಭಯೋತ್ಪಾದನೆ ವಿರುದ್ಧ ಹೋರಾಟ, ಸ್ಮಾರ್ಟ್ ಸಿಟಿ ಯೋಜನೆ ಸಹಕಾರಕ್ಕೆ ಸ್ವಾಗತ, ಮೇಕ್ ಇನ್ ಇಂಡಿಯಾ ಪಾಲುದಾರಿಕೆ ಹೀಗೆ ಎಂಟು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದರು.
ಈ ವೇಳೆ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ – ಜರ್ಮನಿಯ ಸಂಬಂಧ ಐತಿಹಾಸಿಕವಾದದ್ದು, ಎರಡೂ ದೇಶಗಳು ಮೇಡ್ ಫಾರ್ ಈಚ್ ಅದರ್ ಎಂದು ಶ್ಲಾಘಿಸಿದರು.
ಭಾರತ ಜರ್ಮನಿಯ ವಿಶ್ವಾಸಾರ್ಹ ಪಾಲುದಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಜರ್ಮನಿ ಬಂಡವಾಳ ಹೂಡಿಕೆಯ ಪಾಲು ಹೆಚ್ಚಾಗಿದೆ. ಭಯೋತ್ಪಾದನೆ ಇಡೀ ವಿಶ್ವದ ದೊಡ್ಡ ಪಿಡುಗಾಗಿದ್ದು, ಇದನ್ನು ತಡೆಯಲು ಜಂಟಿಯಾಗಿ ಹೋರಾಡಬೇಕಿದೆ ಎಂದು ಪ್ರತಿಪಾದಿಸಿದರು.
ಈ ಮಧ್ಯೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆ, ಭಾರತ ಹಸಿರು ಇಂಧನಕ್ಕೆ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ವ್ಯಾಪಾರ ಒಪ್ಪಂದ, ರೈಲ್ವೇ ಆಧುನೀಕರಣಕ್ಕೆ ಸಹಯೋಗ, ಸ್ಟಾರ್ಟ್ ಅಪ್ ಯೋಜನೆಗೆ ಜರ್ಮನಿ ಕಂಪನಿಗಳ ಸಹಕಾರ, ಗಂಗಾ ಸ್ವಚ್ಛತೆಗೆ ಜರ್ಮನ್ ಕಂಪನಿಗಳ ಭಾಗಿ, ಭಯೋತ್ಪಾದನೆ ವಿರುದ್ಧ ಹೋರಾಟ, ಸ್ಮಾರ್ಟ್ ಸಿಟಿ ಯೋಜನೆ ಸಹಕಾರಕ್ಕೆ ಸ್ವಾಗತ, ಮೇಕ್ ಇನ್ ಇಂಡಿಯಾ ಪಾಲುದಾರಿಕೆ ಹೀಗೆ ಎಂಟು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದರು.
ಈ ವೇಳೆ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ – ಜರ್ಮನಿಯ ಸಂಬಂಧ ಐತಿಹಾಸಿಕವಾದದ್ದು, ಎರಡೂ ದೇಶಗಳು ಮೇಡ್ ಫಾರ್ ಈಚ್ ಅದರ್ ಎಂದು ಶ್ಲಾಘಿಸಿದರು.
ಭಾರತ ಜರ್ಮನಿಯ ವಿಶ್ವಾಸಾರ್ಹ ಪಾಲುದಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಜರ್ಮನಿ ಬಂಡವಾಳ ಹೂಡಿಕೆಯ ಪಾಲು ಹೆಚ್ಚಾಗಿದೆ. ಭಯೋತ್ಪಾದನೆ ಇಡೀ ವಿಶ್ವದ ದೊಡ್ಡ ಪಿಡುಗಾಗಿದ್ದು, ಇದನ್ನು ತಡೆಯಲು ಜಂಟಿಯಾಗಿ ಹೋರಾಡಬೇಕಿದೆ ಎಂದು ಪ್ರತಿಪಾದಿಸಿದರು.
ಈ ಮಧ್ಯೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆ, ಭಾರತ ಹಸಿರು ಇಂಧನಕ್ಕೆ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
No comments:
Post a Comment