ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಎಪಿಎಂಸಿ ಕಾಯ್ದೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಕೃಷಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಶೋಕ್ ದಳವಾಯಿ ತಿಳಿಸಿದ್ದಾರೆ.
ಅಸೋಚಾಮ್ ಸೋಮವಾರ ಆಯೋಜಿಸಿದ್ದ ‘ಆಹಾರ ಸಂಸ್ಕರಣಾ ವಿಭಾಗದ ಹಿಂದುಳಿದ ಕೈಗಾರಿಕೆಗಳ ಸಂಪರ್ಕ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ಪ್ರಸ್ತುತ ದಲ್ಲಾಳಿಗಳ ಕಪಿಮುಷ್ಠಿಯಲ್ಲಿರುವ ಎಪಿಎಂಸಿಗಳಿಂದ ರೈತರಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಎಪಿಎಂಸಿಗಳು ಪರಸ್ಪರ ಸಂಪರ್ಕ ಸಾಧಿಸುವಂತೆ ಮಾಡಲಾಗುತ್ತಿದೆ. ಅಲ್ಲದೆ, ತಂತ್ರಜ್ಞಾ ನಾಧಾರಿತ ಇಲೆಕ್ಟ್ರಾನಿಕ್ ಮಾರುಕಟ್ಟೆ ವ್ಯವಸ್ಥೆ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದ್ದು, ದೇಶದ ಎಲ್ಲ ಎಪಿಎಂಸಿಗಳನ್ನು ಒಂದು ತಂತ್ರಾಂಶದಡಿ ತರಲಾಗುತ್ತದೆ ಎಂದರು.
ದೇಶದಲ್ಲಿನ ಕೃಷಿಕರ ಆದಾಯದ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ. 2012-13ರಲ್ಲಿ ನಡೆದ ಸರ್ವೆ ಪ್ರಕಾರ ಒಬ್ಬ ರೈತನ ಸರಾಸರಿ ಮಾಸಿಕ ಆದಾಯ 6,400 ರೂ., ಖರ್ಚು ಸರಾಸರಿ 6,200 ರೂ. ಇದೆ. ಇನ್ನುಳಿದ 200 ರೂ.ನಲ್ಲಿ ರೈತ ತನ್ನ ತಿಂಗಳ ಜೀವನ ನಡೆಸಬೇಕು. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ, ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸಲು ಸುಧಾರಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು.
ಆಹಾರ ಸಂಸ್ಕರಣೆಗೆ ಸಂಪದ
ಬೆಂಗಳೂರು: ದೇಶದಲ್ಲಿ ರೈತರೇ ಶೀತಲಗೃಹ ನಿರ್ವಿುಸಲು ಅನುಕೂಲವಾಗುವಂತೆ ಸಂಪದ ಯೋಜನೆ ಜಾರಿಯಾಗಲಿದ್ದು, ಈಗಾಗಲೇ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರೈತರಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ರಾಜ್ಯ ಖಾತೆ ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.
ಅಸೋಚಾಮ್ ಕರ್ನಾಟಕ ಘಟಕದಿಂದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹಿಂದುಳಿದವರ ಸಂಪರ್ಕ ವಿಚಾರ ಸಂಕಿರಣ ಉದ್ಘಾಟಿಸಿ, ಆಹಾರ ಸಂಸ್ಕರಣೆ ಹಾಗೂ ಸಂರಕ್ಷಣೆಯಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದುವ ಅಗತ್ಯವಿದೆ ಎಂದರು.
ಏನಿದು ಸಂಪದ?: ರೈತ ತಾನು ಬೆಳೆದ ಉತ್ಪನ್ನಗಳನ್ನು ಸಂರಕ್ಷಿಸಿಡಲು ಅನುಕೂಲವಾಗಲು ಈ ‘ಸಂಪದ’ ಯೋಜನೆಯನ್ನು ಕೇಂದ್ರ ಜಾರಿಗೆ ತರಲಿದೆ. ಈ ಮೊದಲು ಶೀತಲಗೃಹ ನಿರ್ವಿುಸಲು ದೊಡ್ಡ ಪ್ರಮಾಣದ ಜಮೀನು ಇರಬೇಕೆಂಬ ನಿಯಮ ಇತ್ತು. ಈಗ ಸಣ್ಣ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದು, ಅಲ್ಪ ಜಾಗದಲ್ಲೇ ನಿರ್ಮಾಣ ಮಾಡಬಹುದು. ಇದಕ್ಕೆ ಕೇಂದ್ರ ಸಹಾಯಧನ ನೀಡಲಿದೆ ಎಂದರು.
ನ. 3ಕ್ಕೆ ವಿಶ್ವ ಆಹಾರ ಸಮ್ಮೇಳನ
2017ನೇ ಸಾಲಿನ ವಿಶ್ವ ಆಹಾರ ಸಮ್ಮೇಳನವು ನ.3ರಿಂದ 5ರ ವರೆಗೆ ಭಾರತದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.
ಅಸೋಚಾಮ್ ಸೋಮವಾರ ಆಯೋಜಿಸಿದ್ದ ‘ಆಹಾರ ಸಂಸ್ಕರಣಾ ವಿಭಾಗದ ಹಿಂದುಳಿದ ಕೈಗಾರಿಕೆಗಳ ಸಂಪರ್ಕ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ಪ್ರಸ್ತುತ ದಲ್ಲಾಳಿಗಳ ಕಪಿಮುಷ್ಠಿಯಲ್ಲಿರುವ ಎಪಿಎಂಸಿಗಳಿಂದ ರೈತರಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಎಪಿಎಂಸಿಗಳು ಪರಸ್ಪರ ಸಂಪರ್ಕ ಸಾಧಿಸುವಂತೆ ಮಾಡಲಾಗುತ್ತಿದೆ. ಅಲ್ಲದೆ, ತಂತ್ರಜ್ಞಾ ನಾಧಾರಿತ ಇಲೆಕ್ಟ್ರಾನಿಕ್ ಮಾರುಕಟ್ಟೆ ವ್ಯವಸ್ಥೆ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದ್ದು, ದೇಶದ ಎಲ್ಲ ಎಪಿಎಂಸಿಗಳನ್ನು ಒಂದು ತಂತ್ರಾಂಶದಡಿ ತರಲಾಗುತ್ತದೆ ಎಂದರು.
ದೇಶದಲ್ಲಿನ ಕೃಷಿಕರ ಆದಾಯದ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ. 2012-13ರಲ್ಲಿ ನಡೆದ ಸರ್ವೆ ಪ್ರಕಾರ ಒಬ್ಬ ರೈತನ ಸರಾಸರಿ ಮಾಸಿಕ ಆದಾಯ 6,400 ರೂ., ಖರ್ಚು ಸರಾಸರಿ 6,200 ರೂ. ಇದೆ. ಇನ್ನುಳಿದ 200 ರೂ.ನಲ್ಲಿ ರೈತ ತನ್ನ ತಿಂಗಳ ಜೀವನ ನಡೆಸಬೇಕು. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ, ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸಲು ಸುಧಾರಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು.
ಆಹಾರ ಸಂಸ್ಕರಣೆಗೆ ಸಂಪದ
ಬೆಂಗಳೂರು: ದೇಶದಲ್ಲಿ ರೈತರೇ ಶೀತಲಗೃಹ ನಿರ್ವಿುಸಲು ಅನುಕೂಲವಾಗುವಂತೆ ಸಂಪದ ಯೋಜನೆ ಜಾರಿಯಾಗಲಿದ್ದು, ಈಗಾಗಲೇ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರೈತರಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ರಾಜ್ಯ ಖಾತೆ ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.
ಅಸೋಚಾಮ್ ಕರ್ನಾಟಕ ಘಟಕದಿಂದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹಿಂದುಳಿದವರ ಸಂಪರ್ಕ ವಿಚಾರ ಸಂಕಿರಣ ಉದ್ಘಾಟಿಸಿ, ಆಹಾರ ಸಂಸ್ಕರಣೆ ಹಾಗೂ ಸಂರಕ್ಷಣೆಯಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದುವ ಅಗತ್ಯವಿದೆ ಎಂದರು.
ಏನಿದು ಸಂಪದ?: ರೈತ ತಾನು ಬೆಳೆದ ಉತ್ಪನ್ನಗಳನ್ನು ಸಂರಕ್ಷಿಸಿಡಲು ಅನುಕೂಲವಾಗಲು ಈ ‘ಸಂಪದ’ ಯೋಜನೆಯನ್ನು ಕೇಂದ್ರ ಜಾರಿಗೆ ತರಲಿದೆ. ಈ ಮೊದಲು ಶೀತಲಗೃಹ ನಿರ್ವಿುಸಲು ದೊಡ್ಡ ಪ್ರಮಾಣದ ಜಮೀನು ಇರಬೇಕೆಂಬ ನಿಯಮ ಇತ್ತು. ಈಗ ಸಣ್ಣ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದು, ಅಲ್ಪ ಜಾಗದಲ್ಲೇ ನಿರ್ಮಾಣ ಮಾಡಬಹುದು. ಇದಕ್ಕೆ ಕೇಂದ್ರ ಸಹಾಯಧನ ನೀಡಲಿದೆ ಎಂದರು.
ನ. 3ಕ್ಕೆ ವಿಶ್ವ ಆಹಾರ ಸಮ್ಮೇಳನ
2017ನೇ ಸಾಲಿನ ವಿಶ್ವ ಆಹಾರ ಸಮ್ಮೇಳನವು ನ.3ರಿಂದ 5ರ ವರೆಗೆ ಭಾರತದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.
No comments:
Post a Comment