Tuesday, May 2, 2017

ಪ್ರಚಲಿತ ವಿದ್ಯಮಾನ : 03 ಮೇ 2017 : 8ರಿಂದ ಇಂದ್ರಧನುಷ್ 4ನೇ ಹಂತದ ಅಭಿಯಾನ

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರನ್ನು ಹತ್ತು ಮಾರಕ ರೋಗಗಳಿಂದ ದೂರವಿಡುವ ಇಂದ್ರಧನುಷ್ ನಾಲ್ಕನೇ ಹಂತದ ಲಸಿಕಾ ಅಭಿಯಾನ ಮೇ 8ರಂದು ಆರಂಭಗೊಳ್ಳಲಿದೆ.
ಬೆಂಗಳೂರು ನಗರ(ಬಿಬಿಎಂಪಿ ಒಳಗೊಂಡು), ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮೇ ತಿಂಗಳ ಮೊದಲ ಸುತ್ತಿನ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಲಸಿಕೆ ಬಿಟ್ಟು ಹೋಗಿರುವ 11,332 ಗರ್ಭಿಣಿಯರು ಸೇರಿ 82,880 ಮಂದಿಗೆ ಈ ಲಸಿಕೆ ಹಾಕಲಾಗುತ್ತದೆ. ಗರ್ಭಿಣಿಯರು, 0-2 ವರ್ಷದೊಳಗಿನ ಹಾಗೂ 5 ರಿಂದ 6 ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಮತ್ತು ಯಾವುದೇ ಲಸಿಕೆ ಪಡೆಯದೆ ಇರುವ ಮಕ್ಕಳಿಗೆ ಅಭಿಯಾನದಡಿ ಲಸಿಕೆ ಹಾಕಲಾಗುತ್ತದೆ. ಪೋಲಿಯೋ, ಹೆಪಟೈಟಿಸ್-ಬಿ, ಬಾಲಕ್ಷಯ, ಡಿಫ್ತೀರಿಯಾ(ಗಂಟಲು ಮಾರಿ), ಪೆರ್ಟುಸಿಸ್(ನಾಯಿ ಕೆಮ್ಮು), ಧನುರ್ವಾಯು, ಹಿಬ್, ದಡಾರ, ರುಬೆಲ್ಲಾ, ಜಪಾನಿಸ್ ಎನ್​ಸಫಲೈಸಿಸ್ಟ್​ನಂಥ 10 ಮಾರಕ ಕಾಯಿಲೆಗಳಿಗೆ 9 ಲಸಿಕೆ ಹಾಕಲಾಗುತ್ತದೆ. ಮೇ 8ರಿಂದ 19ರ ವರೆಗೆ ಅಭಿಯಾನ ನಡೆಯಲಿದೆ ಎಂದರು.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...