ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರನ್ನು ಹತ್ತು ಮಾರಕ ರೋಗಗಳಿಂದ ದೂರವಿಡುವ ಇಂದ್ರಧನುಷ್ ನಾಲ್ಕನೇ ಹಂತದ ಲಸಿಕಾ ಅಭಿಯಾನ ಮೇ 8ರಂದು ಆರಂಭಗೊಳ್ಳಲಿದೆ.
ಬೆಂಗಳೂರು ನಗರ(ಬಿಬಿಎಂಪಿ ಒಳಗೊಂಡು), ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮೇ ತಿಂಗಳ ಮೊದಲ ಸುತ್ತಿನ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಲಸಿಕೆ ಬಿಟ್ಟು ಹೋಗಿರುವ 11,332 ಗರ್ಭಿಣಿಯರು ಸೇರಿ 82,880 ಮಂದಿಗೆ ಈ ಲಸಿಕೆ ಹಾಕಲಾಗುತ್ತದೆ. ಗರ್ಭಿಣಿಯರು, 0-2 ವರ್ಷದೊಳಗಿನ ಹಾಗೂ 5 ರಿಂದ 6 ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಮತ್ತು ಯಾವುದೇ ಲಸಿಕೆ ಪಡೆಯದೆ ಇರುವ ಮಕ್ಕಳಿಗೆ ಅಭಿಯಾನದಡಿ ಲಸಿಕೆ ಹಾಕಲಾಗುತ್ತದೆ. ಪೋಲಿಯೋ, ಹೆಪಟೈಟಿಸ್-ಬಿ, ಬಾಲಕ್ಷಯ, ಡಿಫ್ತೀರಿಯಾ(ಗಂಟಲು ಮಾರಿ), ಪೆರ್ಟುಸಿಸ್(ನಾಯಿ ಕೆಮ್ಮು), ಧನುರ್ವಾಯು, ಹಿಬ್, ದಡಾರ, ರುಬೆಲ್ಲಾ, ಜಪಾನಿಸ್ ಎನ್ಸಫಲೈಸಿಸ್ಟ್ನಂಥ 10 ಮಾರಕ ಕಾಯಿಲೆಗಳಿಗೆ 9 ಲಸಿಕೆ ಹಾಕಲಾಗುತ್ತದೆ. ಮೇ 8ರಿಂದ 19ರ ವರೆಗೆ ಅಭಿಯಾನ ನಡೆಯಲಿದೆ ಎಂದರು.
No comments:
Post a Comment