ನವದೆಹಲಿ: ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಅವರು ಮೂರು ದಿನಗಳ ಭಾರತ ಭೇಟಿ ಆರಂಭಿಸಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಮಾರಿಷಸ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾರತ 32 ಸಾವಿರ ಕೋಟಿ ರೂ. ನೆರವು ನೀಡುವುದಾಗಿ ಈ ವೇಳೆ ಘೊಷಿಸಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ತೀರದ ಭದ್ರತೆ ವಿಚಾರದಲ್ಲಿ ಪರಸ್ಪರ ಸಹಕಾರ ಭದ್ರ ಪಡಿಸಲೂ ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸದಸ್ಯತ್ವ ಸಿಗಲು ಮಾರಿಷಸ್ ಬೆಂಬಲ ಘೊಷಿಸಿತು. ಹಿಂದೂ ಮಹಾಸಾಗರದಲ್ಲಿನ ಚಾಗೋಸ್ ಆರ್ಕಿಪೆಲಾಗೊ ದ್ವೀಪದ ಮೇಲಿನ ಮಾರಿಷಸ್ ಹಕ್ಕನ್ನು ಭಾರತ ಬೆಂಬಲಿಸಿತು. ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಕಡಲ್ಗಳ್ಳತನ, ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ , ಸಾಗರ ಸಂಪನ್ಮೂಲಗಳ ಅಕ್ರಮ ಬಳಕೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ಮೋದಿ ಚರ್ಚೆಯ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಮಾರಿಷಸ್ನಲ್ಲಿ ಸಿವಿಲ್ ಸರ್ವೀಸಸ್ ಕಾಲೇಜ್ ಸ್ಥಾಪನೆ, ಸಾಗರ ಸಂಶೋಧನೆ ಸಹಕಾರಕ್ಕೂ ಒಪ್ಪಂದ ಏರ್ಪಟ್ಟಿದೆ. ಶನಿವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಜಗನ್ನಾಥ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
–ಏಜೆನ್ಸೀಸ್
–ಏಜೆನ್ಸೀಸ್
No comments:
Post a Comment