Monday, May 15, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ಹ್ಯಾಕರ್ಸ್​​​​​​​​​​​​​​​ ಕೆಂಗಣ್ಣು: ಸಾಫ್ಟ್​​​ವೇರ್​​​ ಅಪ್​​​ಡೇಟ್​​​​​​ಗಾಗಿ ಆರ್​​​ಬಿಐ ಸೂಚನೆ

ಬೆಂಗಳೂರು: ಕಳೆದ ವಾರಾಂತ್ಯದಿಂದ ಕಂಪ್ಯೂಟರ್​ಗಳಿಗೆ ಅಂತಾರಾಷ್ಟ್ರೀಯ ವೈರಸ್ ದಾಳಿ ಭೀತಿ ಕಾಡತೊಡಗಿದೆ. ಇದು ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದೆ. ಇದು ಭಾರತವನ್ನೂ ಕಾಡತೊಡಗಿದೆ. ಇದರಿಂದ ಪಾರಾಗಲು ಎಟಿಎಂ ಸಿಸ್ಟಮ್​ ಅಪ್​ಡೇಟ್​ ಕಾರ್ಯಕ್ಕೆ ಆರ್​ಬಿಐ ಸೋಮವಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ನಗರದ ಎಟಿಎಂಗಳಲ್ಲಿ ಮತ್ತೆ ನೋ ಕ್ಯಾಶ್​​ ಬೋರ್ಡ್​​​​​ ರಾರಾಜಿಸತೊಡಗಿವೆ. ಸದ್ಯಕ್ಕೆ ಬಳಸಲಾಗ್ತಿರೋ ಎಟಿಎಂಗಳು ಔಟ್ ಡೇಟೆಡ್ ಆಗಿದ್ದು, ಅಪಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅಳವಡಿಸುವವರೆಗೆ ಎಟಿಎಂಗಳಿಗೆ ಹಣ ತುಂಬಬಾರದು ಎಂದು ಆರ್​ಬಿಐ ತನ್ನ ಅಧೀನ ಬ್ಯಾಂಕ್​ಗಳಿಗೆ ತಾಕೀತು ಮಾಡಿದೆ.

ಸದ್ಯ ದೇಶದಲ್ಲಿರೋ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದೆ. ಈ ಎಲ್ಲಾ ಎಟಿಎಂಗಳು ಅಪ್​ಡೇಟ್ ಆಗೋವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...