ನವದೆಹಲಿ: ಅಕ್ಕಮಹಾದೇವಿ, ಅಲ್ಲಮಪ್ರಭು ಸಹಿತ 173 ಶರಣರು ಬರೆದಿರುವ ಬಸವಣ್ಣನವರ ಆಯ್ದ 2500 ವಚನಗಳನ್ನೊಳಗೊಂಡ, 23 ಭಾಷೆಗಳಿಗೆ ಅನುವಾದವಾಗಿರುವ ವಚನ ಸಂಪುಟಗಳನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
ಬಸವಣ್ಣನವರ ತತ್ವ, ವಚನ, ಉಪದೇಶಗಳು ಎಲ್ಲಾ ಕಾಲದಲ್ಲೂ ಪ್ರಸ್ತುತ ಎಂದು ಕೊಂಡಾಡಿದ ಪ್ರಧಾನಿ ಮೋದಿ, ತ್ರಿವಳಿ ತಲಾಖ್ ಪದ್ಧತಿಯಿಂದ ಕಂಗೆಟ್ಟಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಮುಸ್ಲಿಂ ಸಮುದಾಯದ ಜನರಿಗೆ ಬಸವಣ್ಣನವರ ತತ್ವಗಳೇ ಪ್ರೇರಕ ಶಕ್ತಿಯಾಗಬೇಕು. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ನಿಂದ ಮುಕ್ತಿ ನೀಡಿ, ಭಾರತೀಯ ಮುಸ್ಲಿಮರು ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಅನಿಷ್ಟ ಪದ್ಧತಿ ಬಡಿದಟ್ಟಲು ಮುಸ್ಲಿಂ ಸಮುದಾಯದವರು ಮುಂದೆ ಬಂದೇ ಬರುತ್ತಾರೆ ಎಂಬ ಭರವಸೆ ನನ್ನದು ಎಂದು ತಿಳಿಸಿದರು.
23 ಭಾಷೆಗಳಿಗೆ ಅನುವಾದವಾಗಿರುವ ವಚನ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, 50 ವರ್ಷ ಪೂರೈಸಿರುವ ಬಸವ ಸಮಿತಿ, ಬಸವೇಶ್ವರನ ಸಂದೇಶವನ್ನು ವಿಶ್ವಕ್ಕೆ ರವಾನಿಸಿ ಬಹುದೊಡ್ಡ ಸಾಧನೆ ಮಾಡಿದೆ. ಆ ಸಮಿತಿಗೆ ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ. ಬಸವಣ್ಣನವರ ವಚನಗಳನ್ನೊಳಗೊಂಡ ವಚನ ಸಂಪುಟ ರಚಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದ ಹಿಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಹಾಗೂ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಡಾ.ಎಂ.ಎಂ. ಕಲ್ಬುರ್ಗಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ. ತಂದೆ ಶುರು ಮಾಡಿದ್ದ ಕಾರ್ಯವನ್ನು ನಿಜಾರ್ಥದಲ್ಲಿ ಪೂರ್ಣಗೊಳಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಎಂದರು.
ವಚನ ಸಂಪುಟ ಬಿಡುಗಡೆ ಬಗ್ಗೆ ಅರವಿಂದ ಜತ್ತಿ ನನ್ನೊಂದಿಗೆ ರ್ಚಚಿಸಿದ್ದರು ಎಂದ ಪ್ರಧಾನಿ, ಆಗ ಸಂಸತ್ತಿನಲ್ಲಿ ನೋಟು ರದ್ದತಿಯದ್ದೇ ಚರ್ಚೆ. ಪ್ರತಿ ದಿನ ಬೇರೆಯವರ ಜೇಬುಗಳಿಗೆ ಕೈ ಹಾಕುತ್ತಿದ್ದ ಮಂದಿ ಅಂದು ಅವರ ಜೇಬುಗಳಿಗೇ ಕೈ ಹಾಕಿ ಈ ನೋಟು ಏನು ಮಾಡುವುದಪ್ಪಾ ಎಂದು ಚಿಂತೆಗೀಡಾಗಿದ್ದರು ಎಂದರು.
ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ತ್ರಿವಳಿ ತಲಾಕ್ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆಧುನಿಕ ವ್ಯವಸ್ಥೆಗಳನ್ನು ಒಪ್ಪಿಕೊಂಡು, ಸಮಾಜದ ನಿಕೃಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಜನರೇ ಮುಂದಾಗುತ್ತಾರೆ ಎಂಬ ಆಶಾಭಾವನೆ ನನ್ನದು. ಮುಸ್ಲಿಂ ಸಮುದಾಯದಲ್ಲೂ ಇಂಥ ಪ್ರಬುದ್ಧ ವ್ಯಕ್ತಿಗಳು ಖಂಡಿತಾ ಮುಂದೆ ಬಂದು ಅಸಮಾನತೆಯಿಂದ ಬಳಲಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸುತ್ತಾರೆ. ಇದರಿಂದ ಮುಸ್ಲಿಂ ಮಹಿಳೆಯರು ಸಂತೋಷ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗುತ್ತದೆ. ಭಾರತೀಯ ಮುಸಲ್ಮಾನರೇ ಈ ಘನ ಕಾರ್ಯಕ್ಕೆ ಮುಂದಾಗಿ ವಿಶ್ವದ ಮುಸ್ಲಿಂ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಆಶಯ, ವಿಶ್ವಾಸ ನನ್ನಲ್ಲಿದೆ. ಏಕೆಂದರೆ ನಮ್ಮ ದೇಶದ ಮಣ್ಣಿನ ಗುಣವೇ ಅಂಥದ್ದು. ಬಸವಣ್ಣನವರು ಕೂಡ ಅನುಭವ ಮಂಟಪದಲ್ಲಿ ಇದನ್ನಲ್ಲವೆ ಹೇಳಿದ್ದು. ಈ ಅತಿ ಸೂಕ್ಷ್ಮ ವಿಷಯ ರಾಜಕಾರಣದಲ್ಲಿ ಸಿಲುಕುವಂತೆ ಮಾಡಬೇಡಿ. ಮುಸ್ಲಿಂ ಮಹಿಳೆಯರ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದು ಮುಸ್ಲಿಂ ಸಮಾಜದ ನನ್ನ ಸಹೋದರರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮೋದಿ ಹೇಳಿದರು.
ಬಸವಣ್ಣನವರ ವಿಚಾರಗಳು ಲಂಡನ್ನ ಥೇಮ್್ಸ ನದಿ ದಂಡೆವರೆಗೆ ವಿಸ್ತರಿಸಿದೆ. ಅಲ್ಲಿ ಬಸವಣ್ಣನವರ ಪ್ರತಿಮೆ ಉದ್ಘಾಟನೆ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಆ ದಿನದಂದು ಅಲ್ಲಿ ಮಳೆ ಬರುತ್ತಿದ್ದರೂ, ಜನ ಪ್ರತಿಮೆ ನೋಡಲು, ಅವರ ಆದರ್ಶಗಳ ಬಗ್ಗೆ ಕೇಳಲು ನಿಸ್ವಾರ್ಥ ಮನಸ್ಸಿನಿಂದ ಬಂದಿದ್ದರು. 800 ವರ್ಷಗಳ ಹಿಂದಿನ ಬಸವಣ್ಣನವರ ವಚನಗಳು, ನೀತಿ, ಉಪದೇಶಗಳು ಇಂದಿಗೂ ನೂರಕ್ಕೆ ನೂರರಷ್ಟು ಪ್ರಸ್ತುತ ಎಂದು ಮೋದಿ ಕೊಂಡಾಡಿದರು.
ಬಸವಣ್ಣನವರ ತತ್ವ, ವಚನ, ಉಪದೇಶಗಳು ಎಲ್ಲಾ ಕಾಲದಲ್ಲೂ ಪ್ರಸ್ತುತ ಎಂದು ಕೊಂಡಾಡಿದ ಪ್ರಧಾನಿ ಮೋದಿ, ತ್ರಿವಳಿ ತಲಾಖ್ ಪದ್ಧತಿಯಿಂದ ಕಂಗೆಟ್ಟಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಮುಸ್ಲಿಂ ಸಮುದಾಯದ ಜನರಿಗೆ ಬಸವಣ್ಣನವರ ತತ್ವಗಳೇ ಪ್ರೇರಕ ಶಕ್ತಿಯಾಗಬೇಕು. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ನಿಂದ ಮುಕ್ತಿ ನೀಡಿ, ಭಾರತೀಯ ಮುಸ್ಲಿಮರು ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಅನಿಷ್ಟ ಪದ್ಧತಿ ಬಡಿದಟ್ಟಲು ಮುಸ್ಲಿಂ ಸಮುದಾಯದವರು ಮುಂದೆ ಬಂದೇ ಬರುತ್ತಾರೆ ಎಂಬ ಭರವಸೆ ನನ್ನದು ಎಂದು ತಿಳಿಸಿದರು.
23 ಭಾಷೆಗಳಿಗೆ ಅನುವಾದವಾಗಿರುವ ವಚನ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, 50 ವರ್ಷ ಪೂರೈಸಿರುವ ಬಸವ ಸಮಿತಿ, ಬಸವೇಶ್ವರನ ಸಂದೇಶವನ್ನು ವಿಶ್ವಕ್ಕೆ ರವಾನಿಸಿ ಬಹುದೊಡ್ಡ ಸಾಧನೆ ಮಾಡಿದೆ. ಆ ಸಮಿತಿಗೆ ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ. ಬಸವಣ್ಣನವರ ವಚನಗಳನ್ನೊಳಗೊಂಡ ವಚನ ಸಂಪುಟ ರಚಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದ ಹಿಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಹಾಗೂ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಡಾ.ಎಂ.ಎಂ. ಕಲ್ಬುರ್ಗಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ. ತಂದೆ ಶುರು ಮಾಡಿದ್ದ ಕಾರ್ಯವನ್ನು ನಿಜಾರ್ಥದಲ್ಲಿ ಪೂರ್ಣಗೊಳಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಎಂದರು.
ನೋಟು ರದ್ಧತಿ ನಂತರ
ವಚನ ಸಂಪುಟ ಬಿಡುಗಡೆ ಬಗ್ಗೆ ಅರವಿಂದ ಜತ್ತಿ ನನ್ನೊಂದಿಗೆ ರ್ಚಚಿಸಿದ್ದರು ಎಂದ ಪ್ರಧಾನಿ, ಆಗ ಸಂಸತ್ತಿನಲ್ಲಿ ನೋಟು ರದ್ದತಿಯದ್ದೇ ಚರ್ಚೆ. ಪ್ರತಿ ದಿನ ಬೇರೆಯವರ ಜೇಬುಗಳಿಗೆ ಕೈ ಹಾಕುತ್ತಿದ್ದ ಮಂದಿ ಅಂದು ಅವರ ಜೇಬುಗಳಿಗೇ ಕೈ ಹಾಕಿ ಈ ನೋಟು ಏನು ಮಾಡುವುದಪ್ಪಾ ಎಂದು ಚಿಂತೆಗೀಡಾಗಿದ್ದರು ಎಂದರು.
ತ್ರಿವಳಿ ತಲಾಕ್ ಬೇಡ, ಬಸವಣ್ಣ ಹೇಳಿದ್ದು ಇದನ್ನೇ
ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ತ್ರಿವಳಿ ತಲಾಕ್ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆಧುನಿಕ ವ್ಯವಸ್ಥೆಗಳನ್ನು ಒಪ್ಪಿಕೊಂಡು, ಸಮಾಜದ ನಿಕೃಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಜನರೇ ಮುಂದಾಗುತ್ತಾರೆ ಎಂಬ ಆಶಾಭಾವನೆ ನನ್ನದು. ಮುಸ್ಲಿಂ ಸಮುದಾಯದಲ್ಲೂ ಇಂಥ ಪ್ರಬುದ್ಧ ವ್ಯಕ್ತಿಗಳು ಖಂಡಿತಾ ಮುಂದೆ ಬಂದು ಅಸಮಾನತೆಯಿಂದ ಬಳಲಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸುತ್ತಾರೆ. ಇದರಿಂದ ಮುಸ್ಲಿಂ ಮಹಿಳೆಯರು ಸಂತೋಷ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗುತ್ತದೆ. ಭಾರತೀಯ ಮುಸಲ್ಮಾನರೇ ಈ ಘನ ಕಾರ್ಯಕ್ಕೆ ಮುಂದಾಗಿ ವಿಶ್ವದ ಮುಸ್ಲಿಂ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಆಶಯ, ವಿಶ್ವಾಸ ನನ್ನಲ್ಲಿದೆ. ಏಕೆಂದರೆ ನಮ್ಮ ದೇಶದ ಮಣ್ಣಿನ ಗುಣವೇ ಅಂಥದ್ದು. ಬಸವಣ್ಣನವರು ಕೂಡ ಅನುಭವ ಮಂಟಪದಲ್ಲಿ ಇದನ್ನಲ್ಲವೆ ಹೇಳಿದ್ದು. ಈ ಅತಿ ಸೂಕ್ಷ್ಮ ವಿಷಯ ರಾಜಕಾರಣದಲ್ಲಿ ಸಿಲುಕುವಂತೆ ಮಾಡಬೇಡಿ. ಮುಸ್ಲಿಂ ಮಹಿಳೆಯರ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದು ಮುಸ್ಲಿಂ ಸಮಾಜದ ನನ್ನ ಸಹೋದರರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮೋದಿ ಹೇಳಿದರು.
ನಿಸ್ವಾರ್ಥ ಮನಸ್ಸಿನಿಂದ ಬಂದಿದ್ದರು
ಬಸವಣ್ಣನವರ ವಿಚಾರಗಳು ಲಂಡನ್ನ ಥೇಮ್್ಸ ನದಿ ದಂಡೆವರೆಗೆ ವಿಸ್ತರಿಸಿದೆ. ಅಲ್ಲಿ ಬಸವಣ್ಣನವರ ಪ್ರತಿಮೆ ಉದ್ಘಾಟನೆ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಆ ದಿನದಂದು ಅಲ್ಲಿ ಮಳೆ ಬರುತ್ತಿದ್ದರೂ, ಜನ ಪ್ರತಿಮೆ ನೋಡಲು, ಅವರ ಆದರ್ಶಗಳ ಬಗ್ಗೆ ಕೇಳಲು ನಿಸ್ವಾರ್ಥ ಮನಸ್ಸಿನಿಂದ ಬಂದಿದ್ದರು. 800 ವರ್ಷಗಳ ಹಿಂದಿನ ಬಸವಣ್ಣನವರ ವಚನಗಳು, ನೀತಿ, ಉಪದೇಶಗಳು ಇಂದಿಗೂ ನೂರಕ್ಕೆ ನೂರರಷ್ಟು ಪ್ರಸ್ತುತ ಎಂದು ಮೋದಿ ಕೊಂಡಾಡಿದರು.
No comments:
Post a Comment